ಹಾಸನ: ವಿವಾದಾತ್ಮಕ ಹೇಳಿಕೆ ನೀಡಿ ತಲೆ ಮರೆಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ (VHP) ಮುಖಂಡನ ವಿರುದ್ಧ ಸಕಲೇಶಪುರ (Sakleshpur) ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಅಲ್ಲದೇ ಆತನ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ವಿಹೆಚ್ಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಎಂಬಾತ ಶುಕ್ರವಾರ ಗೋಹತ್ಯೆ ಖಂಡಿಸಿ ಸಕಲೇಶಪುರದಲ್ಲಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದ. ಈ ವೇಳೆ ಭಾಷಣ ಮಾಡಿದ್ದ ಆತ, ಕಳೆದ ಎರಡು ದಿನಗಳ ಹಿಂದೆ ಸಕಲೇಶಪುರದ ಕ್ಯಾಮನಹಳ್ಳಿಯ ತೋಟದಲ್ಲಿ ಸಾಕಿದ ಎಮ್ಮೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಾವು ಇವತ್ತು ಜಿಹಾದಿ ಮನಸ್ಥಿತಿ ಇರುವವರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಜಿಹಾದಿ ಮನಸ್ಥಿತಿ ಇರುವವವರು ನಮ್ಮ ಮನೆ ಹತ್ತಿರ ಬಂದರೆ ನಮ್ಮ ಮನೆಯ ಕೋವಿಗಳು ಹೊರ ಬರುತ್ತವೆ. ಜಿಹಾದಿ ಮನಸ್ಥಿತಿಗಳು ವ್ಯಾಪರಕ್ಕೆ ಹಿಂದೂಗಳ ಮನೆ ಹತ್ತಿರ ಬಂದರೆ ಎಚ್ಚರಿಕೆಯಿಂದ ಇರಬೇಕು. ಅವರು ಬಂದರೆ ಕೋವಿಗಳಿಂದ ಗುಂಡು ಹಾರಿಸಬೇಕಾಗುತ್ತದೆ ಎಂದಿದ್ದ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಂದಿನ ಮುಖ್ಯಮಂತ್ರಿ ನಾನೇ: ಶಾಮನೂರು ಶಿವಶಂಕರಪ್ಪ
ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗವಾಗಿ ಅವಹೇಳನ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತಡರಾತ್ರಿ ನಿವಾಸದ ಬಳಿ ತೆರಳಿ ಬಂಧನಕ್ಕೆ ಮುಂದಾಗಿದ್ದಾರೆ. ಸದ್ಯ ಆರೋಪಿ ರಘು ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.