ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾಸ್ವಾಮಿ ಅವರಿಗೆ ಮುತ್ತುಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ, ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಪಂಚರತ್ನ ಯಾತ್ರೆ ಹೋದಕಡೆಯಲೆಲ್ಲ ಅದ್ದೂರಿ ಸ್ವಾಗತ ಸಿಕ್ಕಿದೆ. ಕುಮಾರಸ್ವಾಮಿ ನೋಡಲು ಅಭಿಮಾನಿಗಳು, ಬೆಂಬಲಿಗರು ಮುಗಿಬೀಳುತ್ತಿದ್ದಾರೆ. ನೆಚ್ಚಿನ ನಾಯಕನ ಜೊತೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಖುಷಿ ಪಡುತ್ತಾರೆ..
ಶನಿವಾರ ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿಗೆ ಮಹಿಳಾ ಅಭಿಮಾನಿಯೊಬ್ಬಳು ಮುತ್ತು ಕೊಟ್ಟ ಪ್ರಸಂಗ ನಡೆದಿದೆ. ಪಂಚರತ್ನ ಯಾತ್ರೆ ವಾಹನದ ಮೇಲೆ ಮಹಿಳೆ ಏರಿದ ಮಹಿಳೆ ಕುಮಾರಸ್ವಾಮಿ ಅವರ ಪಕ್ಕದಲ್ಲಿ ನಿಂತು ಪೋಟೊ ತೆಗೆದಿಕೊಂಡರು. ಬಳಿಕ ಕುಮಾರಸ್ವಾಮಿ ಅವರ ಕೈಕುಲುವ ನೆಪದಲ್ಲಿ ಕೆನ್ನೆಗೆ ಮುತ್ತಿದ್ದಾರೆ. ಪಕ್ಕದಲ್ಲಿದ್ದ ಜೆಡಿಎಸ್ ಮುಖಂಡರು ಗಾಬರಿಗೊಂಡರು. ಬಳಿಕ ಕುಮಾರಸ್ವಾಮಿ ಅವರು ಈ ವೇಳೆ ಮಹಿಳೆ ಜತೆ ಎಚ್ಡಿಕೆ ಮಾತನಾಡಿ ಕಳಿಸಿದ್ದಾರೆ.
ಈ ಹಿಂದೆಯೋ ಘಟನೆ ನಡೆದಿತ್ತು
ಮಂಡ್ಯದಲ್ಲಿ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಕಿಸ್ ಮಾಡಿದ ಪ್ರಸಂಗ 2019ರಲ್ಲಿ ನಡೆದಿತ್ತು. ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ರೋಡ್ ಶೋ ಮುಗಿಸಿ ಕಾರು ಹತ್ತುತ್ತಿದ್ದ ಸಿಎಂ ಕುಮಾರಸ್ವಾಮಿ ಅವರನ್ನು ಹಿಂಬಾಲಿಸಿ ಬಂದ ಅಭಿಮಾನಿಯೊಬ್ಬ ಕುಮಾರಸ್ವಾಮಿ ಅವರನ್ನು ಎಳೆದು ಕಿಸ್ ಮಾಡಿದ್ದರು. ತಕ್ಷಣ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಹಿಡಿದು ಥಳಿಸಿದ್ದಾರೆ.