ಮೈಸೂರು: ಪೋಸ್ಕೋ ಪ್ರಕರಣದ ಆರೋಪ ಹೊತ್ತು ಜೈಲು ಪಾಲಾಗಿರುವ ಚಿತ್ರದುರ್ಗದ ಶಿವಮೂರ್ತಿ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಗರದ ನಜರಾಬಾದ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಶ್ರೀಗಳ ವಿರುದ್ಧ ತಡರಾತ್ರಿ ಎಫ್ಐಆರ್ (FIR) ದಾಖಲಾಗಿದೆ. CWC ನೆರವಿನಿಂದ ದೂರು ದಾಖಲಿಸಲಾಗಿದೆ ನಂತರ ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿ ಮತ್ತೊಂದು ಎಫ್ ಐ ಆರ್ ದಾಖಲಿಸಲಾಗಿದೆ .
ಸೂಚನೆ : ಚಿತ್ರದುರ್ಗದ ಬೃಹನ್ ಮಠಕ್ಕೆ ತನ್ನದೇ ಆದ ಒಂದು ಇತಿಹಾಸ ಇದೆ ಆದ್ದರಿಂದ ಆರೋಪಿ ಹೆಸರನ್ನು ಶಿವಮೂರ್ತಿ ಸ್ವಾಮೀಜಿ ಎಂದು ನಾವು ಉಲ್ಲೇಖ ಮಾಡುತ್ತಿದ್ದೇವೆ .