ಚನ್ನಗಿರಿ : ಅಭಿವೃದ್ದಿ ಕೆಲಸ ಮಾಡಿದರೆ ಜನ ಕೈ ಬಿಡುವುದಿಲ್ಲ ಎಂಬುದಕ್ಕೆ ಜ್ವಲವಂತ ಸಾಕ್ಷಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal Virupakshappa) , ಹೌದು ನಿಮ್ಮ ತ್ರಿಮಿತ್ರ ನ್ಯೂಸ್ ಚನ್ನಗಿರಿ ಕ್ಷೇತ್ರದ ಸಂಚಾರ ಮಾಡಿದಾಗ ಅದ ಅನುಭವವಿದು , ಕ್ಷೇತ್ರದ ಚುನಾವಣಾ ಪೂರ್ವ ಸಮೀಕ್ಷೆ ಮಾಡಲು ಹೋದಾಗ ಜನರು ಮಾಡಾಳ್ ವಿರೂಪಾಕ್ಷಪ್ಪ ಅವರ ಕೈ ಬಿಡುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲೆ ಇನ್ನೂ ಎಷ್ಟು ಬಾರಿ ರೇಡ್ ಆದರೂ ನಾವು ಅವರ ಕೈ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ,ಅವರ ವಯಕ್ತಿಕ ವಿಚಾರ ಏನ್ ಇರಲಿ ಅವರು ನಮ್ಮ ಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ ,ಹಲವು ಅನುದಾನಗಳನ್ನು ನಮ್ಮ ಕ್ಷೇತ್ರಕ್ಕೆ ತಂದು ಕ್ಷೇತ್ರವನ್ನು ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಸಾರ್ವಜನಿಕರು ಹೇಳಿದರು .
ಹಾಳು ಚನ್ನಗಿರಿಯನ್ನು ಅಭಿವೃದ್ದಿ ಮಾಡಿದ್ದೆ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa)
ಚನ್ನಗಿರಿ ಕ್ಷೇತ್ರದಿಂದ ಹಲವು ಜನ ವ್ಯಕ್ತಿಗಳು ಮುಖ್ಯಮಂತ್ರಿ ಸಚಿವರು ಆದರೂ ಯಾರು ಕೂಡ ಚನ್ನಗಿರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡಿರಲಿಲ್ಲ ಒಂದು ಕಾಲದಲ್ಲಿ ಚನ್ನಗಿರಿ ಕ್ಷೇತ್ರದ ನೋಡಿ ನಗುತಿದ್ದರು ಇಂದು ಚನ್ನಗಿರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಾಯಿ ಮೇಲೆ ಬೆರಳು ಇಡುವಂತೆ ಆಗಿದೆ ,ದೊಡ್ಡ ರಸ್ತೆಗಳು ,ಸರ್ಕಾರಿ ಆಸ್ಪತ್ರೆ, ನಗರದ ಕೆರೆ ಜೀರ್ಣೋದ್ಧಾರ
ಕೆ.ಎಸ್.ಅರ್. ಟಿ.ಸಿ.ಬಸ್ ಡಿಪೋ ( ಮಂಜೂರಾಗಿದೆ) , ಕುಡಿಯುವ ನೀರು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಏತ ನೀರಾವರಿ ಯೋಜನೆ ಜೊತೆಗೆ ಇನ್ನೂ ನಾನಾ ತರಹದ ಅಭಿವೃದ್ಧಿ ಕೆಲಸಗಳನ್ನು ಮಾಡಾಳ್ ವಿರೂಪಾಕ್ಷಪ್ಪ ಶಾಸಕರಾದ ಮೇಲೆ ಮಾಡಿದ್ದಾರೆ .
ಜನರ ಕಷ್ಟಕ್ಕೆ ಮಿಡಿಯುತಿರುವ ಚನ್ನಗಿರಿ ಯುವ ನೇತಾರ ಮಾಡಳ್ ಮಲ್ಲಿಕಾರ್ಜುನ್
ಮಾಡಾಳ್ ವಿರೂಪಾಕ್ಷಪ್ಪ ಹೆಸರಿಗಿಂತ ಜಾಸ್ತಿ ಕೇಳಿ ಬರುತ್ತಿದೆ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಹೆಸರು ( madal mallikarjuna )
ಚನ್ನಗಿರಿ (Channagiri) ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗಿಂತ ಅವರ ಪುತ್ರ ಮಲ್ಲಿಕಾರ್ಜುನ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ , ವಿರೂಪಾಕ್ಷಪ್ಪರವರಿಗೆ ಅನಾರೋಗ್ಯ ಕಾರಣ ಹೆಚ್ಚಾಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ರವರೆ ಸುತ್ತಿ ತಮ್ಮ ತಂದೆಗೆ ಸರಿ ಸಮನಾಗಿ ಕೈ ಜೋಡಿಸುತ್ತಾ ಮಾಡಾಳ್ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ,ಅದೇ ರೀತಿಯಾಗಿ ಸಣ್ಣ ಹುಡುಗರಿಂದ ಹಿಡಿದು ದೊಡ್ಡವರ ಬಾಯಿಯಲ್ಲೂ ಕೂಡ ಮಲ್ಲಿಕಾರ್ಜುನ ಹೆಸರು ಮುನ್ನಲೆಯಲ್ಲಿದೆ .
ಒಟ್ಟಿನಲ್ಲಿ *ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಮಲ್ಲಿಕಾರ್ಜುನ ಅವರನ್ನು ಕ್ಷೇತ್ರದ ಜನರು ಯಾವ ಕಾರಣಕ್ಕೂ ಕೈ ಬಿಡುವ ಲಕ್ಷಣ ಇಲ್ಲ.
ವಿರೋಧಿಗಳಿಗೆ ನಡುಕ
ಮಾಡಲ್ ಮಲ್ಲಿಕಾರ್ಜುನ ವರ್ಚಸ್ಸು ದಿನೇ ದಿನೇ ಜಾಸ್ತಿ ಆದಂತೆ ವಿರೋಧಿಗಳಲ್ಲಿ ನಡುಕ ಪ್ರಾರಂಭ ಆಗಿತ್ತು
ಸಾಮಾಜಿಕ ಜಾಲತಾಣದಲ್ಲಿ ಕೊಡ ಮಲ್ಲಿಕಾರ್ಜುನ ಆಕ್ಟಿವ್
ಮಾಡಲ್ ಮಲ್ಲಿಕಾರ್ಜುನ ಜನರ ಬಳಿಗೆ ತಲುಪಲು ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದರು ,ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತಿದರು ದಿನ ಬೆಳಗ್ಗೆಯಿಂದ ರಾತ್ರಿ ವರೆಗೂ ಕ್ಷೇತ್ರದ ತುಂಬ ಸಂಚಾರ ಮಾಡಿ ಜನರ ಬಳಿ ಬರುತ್ತಿದ್ದರು
ದಿನೇ ದಿನೇ ಹೆಚ್ಚುತ್ತಿದೆ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳ ಪಟ್ಟಿ
1) ಧನಂಜಯ್ ಸರ್ಜಿ
2) ರುದ್ರಗೌಡ ಶಿವಮೊಗ್ಗ
3) ತುಮ್ಕೊಸ್ ಶಿವಕುಮಾರ್
4) ಮಂಜುಳಾ ಟಿವಿ ರಾಜು