ಜನರ ಕಷ್ಟಕ್ಕೆ ಮಿಡಿಯುತಿರುವ ಚನ್ನಗಿರಿ ಯುವ ನೇತಾರ ಮಾಡಳ್ ಮಲ್ಲಿಕಾರ್ಜುನ್

ಚನ್ನಗಿರಿ : ಜನನಾಯಕ ಅಂದ್ರೆ ಹೀಗಿರಬೇಕು , ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ಆಗಿರಬೇಕು , ಆದ್ರೆ ಈಗಿನ ಸಮಯದಲ್ಲಿ ನಾವು ಈ ಥರ ಊಹಿಸಲು ಸಾಧ್ಯವಿಲ್ಲ . ಆದ್ರೆ ಚನ್ನಗಿರಿಯ ಯುವ ನೇತಾರ ಮಾಡಳ್ ಮಲ್ಲಿಕಾರ್ಜುನ ಈ ಮಾತನ್ನು ಸುಳ್ಳು ಮಾಡಿದ್ದಾರೆ , ತನ್ನ ತಂದೆ ಚನ್ನಗಿರಿ ಶಾಸಕ ಕೆ.ಮಾಡಳ್ ವಿರೂಪಾಕ್ಷಪ್ಪ ಅವರ ಮಗ ಅನ್ನುವ ಹಮ್ಮು ಬಿಮ್ಮು ಇಲ್ಲದೆ ತಮ್ಮ ಸ್ವಂತ ಕೆಲಸಗಳಿಂದ ಹೆಸರು ಮಾಡಿ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ , ಯಾವುದೇ ಸಣ್ಣ ಹುಡುಗರ ಬಾಯಿಯಲ್ಲಿ ಮಾಡಳ್ ಮಲ್ಲಿಕಾರ್ಜುನ ಹೆಸರು ಅಚ್ಚಳಿಯದೆ ಉಳಿದಿದೆ . ಮಾಡಳ್ ಮಲ್ಲಿಕಾರ್ಜುನ ಅವರು ನೊಂದ ಜನರಿಗೆ ಸಹಾಯ , ಅನ್ಯಾಯ ಹಾಗೂ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ . ಚನ್ನಗಿರಿ ತಾಲೂಕಿನಲ್ಲಿ ಜನರ ಯಾವುದೇ ಮದುವೆ ,ಅಥವ ಯಾವುದೇ ಶುಭ ಕಾರ್ಯಗಳಲ್ಲಿ ಭಾಗವಾಗಿ ಇರುತ್ತಾರೆ , ಯಾರಾದ್ರೂ ನಿಧನ ಹೊಂದಿದ್ದರೆ ಅವರ ಮನೆಗೆ ಸಾಂತ್ವಾನ ಹೇಳಲು ವಿಷಯ ಗೊತ್ತಾದ ತಕ್ಷಣ ಭೇಟಿ ನೀಡುತ್ತಾರೆ , ಎಷ್ಟೋ ಭಾರಿ ತಾವು ಮಾಡಿದ ಸಹಾಯ ಯಾರಿಗೂ ಕಾಣದಂತೆ ಮಾಡಿ ಮುಗಿಸಿದ್ದಾರೆ…

 

*ಅನಾರೋಗ್ಯದ ವ್ಯಕ್ತಿಯ ಸಂಪೂರ್ಣ ಚಿಕಿತ್ಸೆ ಜವಾಬ್ದಾರಿ ವಹಿಸಿಕೊಂಡ ಮಾಡಳ್ ಮಲ್ಲಿಕಾರ್ಜುನ*

ಹಿ

ಹಿರೇಮಳಲಿ ಗ್ರಾಮ ಪಂಚಾಯಿತಿಯ ಶಿವಗಂಗೆಹಾಳ್ ಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರೊಬ್ಬರು ಮಾಡಳ್ ಮಲ್ಲಿಕಾರ್ಜುನ ನವರನ್ನು ಭೇಟಿ ಮಾಡಿ ಅವರ ಅನಾರೋಗ್ಯದ ಬಗ್ಗೆ ತಿಳಿಸಿದಾಗ ಅವರಿಗೆ ವಯಕ್ತಿಕ ಧನ ಸಹಾಯ ಮಾಡಿ ಚಿಕಿತ್ಸೆಯ ಜವಾಬ್ದಾರಿಯನ್ನು ಯುವ ನಾಯಕ ಮಾಡಳ್ ಮಲ್ಲಿಕಾರ್ಜುನ್ ವಹಿಸಿಕೊಂದಿದ್ದಾರೆ . ಇಂತಹ ಎಷ್ಟೋ ಕೆಲಸಗಳನ್ನ ಮಾಡಳ್ ಮಲ್ಲಿಕಾರ್ಜುನ್ ಅವರು ಯಾರಿಗೂ ಕಾಣದ ಹಾಗೆ ಮಾಡಿ ಮುಗಿಸಿದ್ದಾರೆ ಜೊತೆಗೆ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ….

Leave a Reply

Your email address will not be published. Required fields are marked *