ಅದ್ದೂರಿಯಾಗಿ ನಡೆದ ನಂಜುಂಡೇಶ್ವರ ನ ಪಂಚ ರಥೋತ್ಸವ

ತ್ರಿ ಮಿತ್ರ ನ್ಯೂಸ್ ಮೈಸೂರು : ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ನಂಜನಗೂಡು ಶ್ರಿ ನಂಜುಂಡೇಶ್ವರ ನ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಕೋವಿಡ್ ಮಹಾಮರಿಯಿಂದ ನಿಂತಿದ್ದ ಅದ್ದೂರಿ ರಥೋತ್ಸವ ಎರಡು ವರ್ಷಗಳ ಬಳಿಕ ಅದ್ದೂರಿಯಾಗಿ ಮಹಾರಥೋತ್ಸವ ನಡೆದಿದೆ.ಇಂದು ಮುಂಜಾನೆ 4.00 ಗಂಟೆಗೆ ಶುಭ ಮಕರ ಲಗ್ನದಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಚಾಲನೆ ನೀಡಿದರು

.

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದ್ದಿತ್ತು . ಪಂಚ ರಥೋತ್ಸವದ ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವ ಚಿತ್ರವನ್ನು ಅಭಿಮಾನಿಗಳು ಪ್ರದರ್ಶಿಸಿದ್ದಾರೆ . ರಥೋತ್ಸವದಲ್ಲಿ ಡಿ.ಸಿ. ಭಾಗಾದಿ ಗೌತಮ್, ಶಾಸಕ ಹರ್ಷವರ್ಧನ್ ಭಾಗಿಯಾಗಿದ್ದರು.

ಅದರ ಕುರಿತು ವಿಡಿಯೋ ಇಲ್ಲಿದೆ ನೋಡಿ

 

Leave a Reply

Your email address will not be published. Required fields are marked *