ಬೆಂಗಳೂರು :. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚರ್ಯ ಅವರಿಗೆ ಅನಾಮಧೆಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆ ಬಂದಿದೆ . ಇನ್ನು ಇದರ ಬಗ್ಗೆ ಶಾಸಕ ರೇಣುಕಾಚರ್ಯ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ರಾಜ್ಯದಲ್ಲಿ ಹಿಜಾಬ್ ಹಾಗೂ ಹಲಾಲ್ ವಿಚಾರ ತಾರಕಕ್ಕೆ ಏರುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ನಿನ್ನನ್ನು ಇನ್ನೆರಡು ದಿನಗಳಲ್ಲಿ ಕೊಲೆ ಮಾಡುತ್ತೇನೆ ನೀನು ನಮ್ಮ ಧರ್ಮದ ವಿಚಾರದಲ್ಲಿ ತಲೆ ಹಾಕುತಿದೀಯ ನಿಂಗೆ ಹಿಂಗೆ ಆದ್ರೆ ಸರಿ ಇರಲ್ಲ ನಿನನ್ನು ಕೊಲೆ ಇನೆರಡು ದಿನದಲ್ಲಿ ಕೊಲೆ ಮಾಡುತ್ತೇವೆ ಎಂದು ಹೇಳಿದ್ದಾನೆ . ಸದಾಶಿವ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭ ಮಾಡಿದ್ದಾರೆ …
ಶಾಸಕರೊಂದಿಗೆ ಅನಾಮಧೆಯ ವ್ಯಕ್ತಿ ಮಾತನಾಡಿದ ಆಡಿಯೋ ಇಲ್ಲಿದೆ