Shivamogaದ ತ್ಯಾಗರ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ.

ಸಂವಿಧಾನ ಜಾಗೃತಿ ಜಾಥಾ

ಸಾಗರದ ತ್ಯಾಗರ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಫೆ.6 ರಂದು ಏರ್ಪಡಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಯಿತು. ಜಾಥಾ ತ್ಯಾಗರ್ತಿ ವೃತ್ತದಿಂದ ಪ್ರಾರಂಭಗೊಂಡು, ಶಾದಿಮಹಲ್, ಅಂಬೇಡ್ಕರ ವೃತ್ತ, ಗಾಂಧಿ ಮೈದಾನದಲ್ಲಿ ಸಾಗಿ ಬಂದು ನೆಹರು ಮೈದಾನದಲ್ಲಿ ಮುಕ್ತಾಯಗೊಂಡಿತು. ಡಿಎಸ್‍ಎಸ್ ತಾಲ್ಲೂಕು ಸಂಚಾಲಕರಾದ ಲಕ್ಷ್ಮಣ್ ಸಾಗರ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ನಗರಸಭೆ ಮಾಜಿ ಅಧ್ಯಕ್ಷೆ ಲಲಿತಮ್ಮ, ಮಧುರಾ ಶಿವಾನಂದ ಹಾಗೂ ನಗರಸಭೆಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *