ಅದೇನು ಮೆಕ್ಕಾ-ಮದೀನಾನಾ ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ – ಮುತಾಲಿಕ್‌ ಪ್ರಶ್ನೆ

ಹುಬ್ಬಳ್ಳಿ: ವಿಧಾನಸೌಧದಲ್ಲಿ (Vidhana Soudha) ನಮಾಜ್‌ ಮಾಡಲು ಅವಕಾಶ ಕೇಳೋದಕ್ಕೆ ಅದೇನು ಮೆಕ್ಕಾ-ಮದೀನಾನಾ? ನಮಾಜ್‌ ಮಾಡೋಕೆ ಬೇರೆ ಕಡೆ ಸ್ಥಳ ಇಲ್ವಾ? ಎಲ್ಲಾ ಕಡೆ ಅನಧಿಕೃತವಾಗಿ ಮಸೀದಿಗಳನ್ನ ಕಟ್ಟಿದ್ದೀರಲ್ಲಾ ಅಲ್ಲಿ ಹೋಗಿ ನಮಾಜ್‌ (Namaz) ಮಾಡಿ.. ಇಂತಹ ಮನಸ್ಥಿತಿಗಳೇ ಕೋಮುವಾದಕ್ಕೆ ಕಾರಣವಾಗ್ತಿದೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿ ಕಾರಿದ್ದಾರೆ.

ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಮತ್ತು ಹಿಂದೂಪರ ಸಂಘಟನೆಗಳಿಗೆ ಭಯದ ವಾತಾವರಣವನ್ನ ಕಾಂಗ್ರೆಸ್ ಸರ್ಕಾರ (Congress Government) ನಿರ್ಮಾಣ ಮಾಡಿದೆ. ಇನ್ನೂ ಒಂದು ವರ್ಷದಲ್ಲಿ ನಮ್ಮ ಸಂಘಟನೆ ಯಾವ ಪ್ರಮಾಣದಲ್ಲಿ ಬೆಳೆಯುತ್ತೆ ನೋಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಪತ್ರಿ ಗ್ರಾಮದಲ್ಲೂ ಸಂಘಟನೆ ಬಲವಾಗುತ್ತದೆ, ಒಬ್ಬ ಹಿಂದೂವನ್ನ ಮುಟ್ಟೋದಿರಲಿ ತಂಟೆಗೆ ಬರೋಕು ಯೋಚನೆ ಮಾಡ್ಬೇಕು. ಜೈನ ಮುನಿಗಳ ಹತ್ಯೆ ಮಾಡಿದವರ ಮೇಲೆ ಯೋಗಿ ಮಾದರಿ ಕ್ರಮ ತೆಗೆದುಕೊಳ್ಳಬೇಕು. ಒಂದು ವರ್ಷದಲ್ಲಿ ಅವರು ಹೊರಗೆ ಬರ್ತಾರೆ ಉತ್ತರ ಪ್ರದೇಶ ಮಾದರಿಯಲ್ಲಿ ಮೂರು ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿದ್ರೆ ಎಲ್ಲವೂ ಸರಿಯಾಗುತ್ತೆ ಎಂದು ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ ಅಧಿವೇಶನದಲ್ಲಿ ಜೆಡಿಎಸ್ ಪರಿಷತ್ ಸದಸ್ಯ ಫಾರೂಕ್, ವಿಧಾನಸೌಧದಲ್ಲಿ ನಮಗೆ ನಮಾಜ್‍ಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯಿಸಿದ್ದರು.

Leave a Reply

Your email address will not be published. Required fields are marked *