ಮಗ ಮಾಡಿದ ತಪ್ಪಿಗೆ ವಿರೂಪಾಕ್ಷಪ್ಪ ಹೇಗೆ ಕೆಟ್ಟವರು?: ಸಚಿವ ಮುನಿರತ್ನ

ಕೋಲಾರ : ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ತಪ್ಪು ಮಾಡಿದ್ದಾನೆಯೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ ರಾಜಕಾರಣದಲ್ಲಿದ್ದ ಮಾತ್ರಕ್ಕೆ ಮಗ  ಮಾಡಿದ ತಪ್ಪಿಗೆ  ಅಪ್ಪ ಹೇಗೆ ಕೆಟ್ಟವರು ಆಗುತ್ತಾರೆ? ತನಿಖೆ ನಡೆದು ತೀರ್ಪು ಹೊರಬೀಳಲಿ. ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ’ ಎಂದು ಸಚಿವ ಮುನಿರತ್ನ ಹೇಳಿದರು .

ಕೋಲಾರದಲ್ಲಿ ಮಾತನಾಡಿದ ಸಚಿವ ಮುನಿರತ್ನ ‘ಜೈಲಿಗೆ ಹೋಗಿ ಪದಕ  ಗೆದ್ದವರಂತೆ ವಿಮಾನ ನಿಲ್ದಾಣದಿಂದ ಮೆರವಣಿಗೆ ಬಂದವರು ಇಂದು ನಮ್ಮ ಪಕ್ಷದ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಆದ್ರೆ ಅವರ ತಟ್ಟೆಯಲ್ಲಿ ನೊಣ ಬಿದ್ದರು ನಮ್ಮ ತಟ್ಟೆಯನ್ನು ಇಣುಕಿ ನೋಡುತ್ತಿದ್ದಾರೆ ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣದಿಂದ ಬಿಜೆಪಿಗೆ  ಯಾವುದೇ ಹಿನ್ನಡೆ  ಆಗುವುದಿಲ್ಲ ಎಂದು ಹೇಳಿದರು .

Leave a Reply

Your email address will not be published. Required fields are marked *