ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಸಿಪಿಐ ಸಸ್ಪೆಂಡ್

ಬಾಗಲಕೋಟೆ: ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಸ್ಪೆಂಡ್ ಮಾಡಿದ್ದಾರೆ. ಸೆ.6ರಂದು ಕೆರೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದರು. ಇದರಿಂದ ಜಗದೀಶ್ ಕಾರಂತ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಿಪಿಐ ವಿರುದ್ಧ ಕೆರೂರು ಚಲೋ ನಡೆಸಿದರು. ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಗೆ ಮಣಿದು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಿಪಿಐನ್ನು ಅಮಾನತುಗೊಳಿಸಿದ್ದಾರೆ.

Leave a Reply

Your email address will not be published. Required fields are marked *