Viral News | ಕಬ್ಬಡಿ ಆಟದ ವೇಳೆ ಆಕ್ರಮಣ – ಹೃದಯ ಸ್ತಂಭನದಿಂದ ಬಿ.ಎಸ್ಸಿ ವಿದ್ಯಾರ್ಥಿ ಸಾವು

ಸೇಲಂ: ಕಬಡ್ಡಿ ಪಟುವೊಬ್ಬ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಸೇಲಂ ಬಳಿಯ ಮನಾದಿಕುಪ್ಪಂ ಪಟ್ಟಣದಲ್ಲಿ ನಡೆದಿದೆ.ಮೃತನನ್ನು 22 ವರ್ಷದ ವಿಮಲ್‌ರಾಜ್ ಎಂದು ಗುರುತಿಸಲಾಗಿದೆ.ಮೃತ ವಿಧ್ಯಾರ್ಥಿ ಸೇಲಂನ ಸರ್ಕಾರಿ ಕಾಲೇಜೊಂದರಲ್ಲಿ ಬಿ.ಎಸ್ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ .

 

 

 

ರೈಡಿಂಗ್‌ಗೆ ಹೋಗಿದ್ದ ವಿಮಲರಾಜ್ ಮೇಲೆ ಎದುರಾಳಿ ತಂಡದವರು ಆಕ್ರಮಣ ಮಾಡಿದ್ದಾರೆ. ಈ ವೇಳೆ ಎದುರಾಳಿ ತಂಡದ ಆಟಗಾರ ವಿಮಲರಾಜ್ ಮೇಲೆ ಓಡಿ ಬಂದು ಮೊಣಕಾಲು ಇಟ್ಟಿದ್ದಾನೆ. ಇದರಿಂದ ಸ್ಥಳದಲ್ಲೆ ಕುಸಿದ ವಿಮಲರಾಜ್, ಹೃದಯ ಸ್ತಂಭನದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಈ ಕುರಿತು ವಿಡಿಯೊ ವೈರಲ್ ಆಗಿದೆ. ಸೇಲಂ ಪೊಲೀಸ್ ಠಾಣೆಯಲ್ಲಿ  ‘ಸಾಮಿ ಕಬಡ್ಡಿ ಅಕಾಡೆಮಿ’ ಮೇಲೆ ಪ್ರಕರಣ  ದಾಖಲಾಗಿದ್ದು   ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published. Required fields are marked *