ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು: ಭಗವದ್ಗೀತೆಯನ್ನು ಓದಿದವರು ಯಾರೂ ಭಯೋತ್ಪಾದಕರಾಗಿಲ್ಲ. ಬದಲಿಗೆ ಅವರು ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಮಹಾತ್ಮ ಗಾಂಧಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಆದರ್ಶವಾಗಿದೆ. ಅದರಲ್ಲಿ ಆಕ್ಷೇಪಾರ್ಹ ಸಂಗತಿಗಳಿದ್ದರೆ ಹೇಳಲಿ. ಗಾಂಧಿ, ತಿಲಕ್​, ನೆಹರು ಸೇರಿದಂತೆ ಅನೇಕರಿಗೆ ಪ್ರೇರಣೆ ನೀಡಿದೆ. ಭಗವದ್ಗೀತೆ ಕೆಟ್ಟ ಕೆಲಸಗಳಿಗೆ ಪ್ರಚೋದನೆ ನೀಡಲ್ಲ. ಅದು ಪ್ರೇರಣೆಯಾರಿಗೆ ಜೀವನ ಸಾರ್ಥಕತೆ ಬೇಕೋ ಅಂಥವರು ಭಗವದ್ಗೀತೆಯಿಂದಲೂ ಪ್ರೇರಣೆ ಪಡೆಯುತ್ತಾರೆ. ದೇಶದಲ್ಲಿ ಭಗವದ್ಗೀತೆಯನ್ನು ಓದಿ ಭಯೋತ್ಪಾದಕರಾದಂತಹ ಒಂದು ಉದಾಹರಣೆ ಇಲ್ಲ ಎಂದರು. ನೀಡುತ್ತದೆ ಎಂದರು.

Leave a Reply

Your email address will not be published. Required fields are marked *